Thursday, November 27, 2008

ಸಾವಿಗೆ ಕೊನೆ ಇಲ್ಲ...


ಸಾವು ಇರುವುದೇ ಹಾಗೆ...
ಯಾರನ್ನೂ ನೋಡುವುದಿಲ್ಲ, ಚಿಂತಿಸುವುದಿಲ್ಲ, ಮರುಗುವುದಿಲ್ಲ, ಕೊರಗುವುದಿಲ್ಲ.
ಸಾವು ಯಾರನ್ನೂ ನೋಡುವುದಿಲ್ಲ...
ಗಂಡು ಹಾರಿಸುತ್ತಿರುವ ಉಗ್ರನನ್ನಾದರೂ ಸರಿ; ಜನರನ್ನು ರಕ್ಷಿಸಲು ನಿಂತ ಪೊಲೀಸರನ್ನಾದರೂ ಸರಿ. ದೇಶ ರಕ್ಷಣೆಗೆ ನಿಂತ ಸೈನಿಕರನ್ನಾದರೂ ಸರಿ.
ಸಾವು ಸಮಯ ನೋಡುವುದಿಲ್ಲ...
ಮನೆಯಲ್ಲಿದ್ದರಾದರೂ ಸರಿ, ಹೋಟೆಲ್‌ನಲ್ಲಿದ್ದರಾದರೂ ಸರಿ, ಪ್ರಯಾಣದಲ್ಲಾದರೂ ಸರಿ.
ಸಾವು ಸ್ಥಿತಿ ಗಮನಿಸುವುದಿಲ್ಲ...
ಸಂಭ್ರಮದಲ್ಲಿದ್ದರೂ ಸರಿ, ಸಂಕಷ್ಟದಲ್ಲಿದ್ದರೂ ಸರಿ, ಯಾರನ್ನೋ ಕಾಣುವ ಕಾತರದಲ್ಲಿದ್ದರೂ ಸರಿ, ಏನನ್ನೋ ಪಡೆಯವ; ಗಳಿಸುವ ಛಲವಿದ್ದರೂ ಸರಿ.
ಸಾವು ಯಾರನ್ನೂ ಬಿಡುವುದಿಲ್ಲ...
ಬಡವನಾದರೂ ಸರಿ, ಧನಿಕನನ್ನಾದರೂ ಸರಿ, ಮಾಣಿಯಾದರೂ ಸರಿ, ಮಾಲಿಕನಾದರೂ ಸರಿ.
ಸಾವು ಇರುವುದೇ ಹೀಗೆ.

- ನ. ೨೬ರ ರಾತ್ರಿ ಸಾವಿಗೆ ಕಾರಣ ಹುಡುಕಲು, ಇದನ್ನು ಬರೆಯಲು ಕಾರಣವಾಗಿದ್ದು, ಮುಂಬೈನಲ್ಲಿ ನಡದ ಉಗ್ರರ ಅಟ್ಟಹಾಸ.
ಉಗ್ರರೂ ಒಂದು ರೀತಿಯಲ್ಲಿ ಸಾವಿನಂತೆಯೆ. ಕುರಡು ಉದ್ದೇಶಕ್ಕೆ, ತಮ್ಮದಲ್ಲದ ಆಸೆಗೆ, ಯಾರದೋ ಒತ್ತಡಕ್ಕೆ ಸಿಕ್ಕಿಯೋ ಅಥವಾ ಮತ್ಯ್ತಾವದೋ ಕಾರಣಕ್ಕಾಗಿಯೋ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾರೆ. ಯಾರಿಗೋ ಯಾರದೋ ಮೇಲಿರುವ ಕೋಪ ಅಮಾಯಕರ ಬಾಳಿನಲ್ಲಿ ಬರಸಿಡಿಲಾಗಿ ಬಡಿಯುತ್ತದೆ. ಆ ತಾಜ್‌ನಲ್ಲಿರಲಿ, ನಾರಿಮನ್ ಪ್ರದೇಶದಲ್ಲಿರಲಿ, ಓಬೆರಾಯ್ ಹೋಟೆಲ್‌ನಲ್ಲಾಗಲೀ ಸಾವಿಗೀಡಾದ ನೂರಕ್ಕೂ ಹಚ್ಚು ಜೀವಗಳ ಕನಸುಗಳು ಏನಾಗಿದ್ದವೋ? ಬೆಳಗ್ಗೆಗಾಗಿ ಏನೇನು ಯೋಜನೆಗಳು ಸಿದ್ಧವಾಗಿದ್ದವೋ. ಏನೇನು ಅಂದುಕೊಂಡಿದ್ದರೋ. ಅವರ ಪ್ರಾಣದೊಂದಿಗೆ ನುಚ್ಚು ನೂರಾದವಲ್ಲ ಆ ಕಸಸುಗಳು ಅವುಗಳಿಗೆ ಬೆಲೆ ಕಟ್ಟುವವರು ಯಾರು? ರಾತ್ರಿ ಮಲಗಿ ಮುಂಜಾನೆಯಾಗುವವರೆಗೆ ಅವರನ್ನು ಜವಾರಾಯನ ಬಳಿಗೆ ಕಳುಹಿಸುವ ಕೃತ್ಯ ಎಸಗಿದ ಉಗ್ರ ಎನ್ನುವವರಿಗೆ ಬುದ್ಧಿ ಹೇಳುವವರು ಯಾರು?
ಇಷ್ಟಕ್ಕೂ ಅವರ ಬುದ್ಧಿವಂತಿಕೆ ಎದುರು ನಮ್ಮ ಪೊಲೀಸ್ ವ್ಯವಸ್ಥೆಯ, ಆಡಳಿತದ, ಗಪ್ತಚರ ವಿಭಾಗದವರ ಬದ್ಧಿಗೆ ಏನಾಗಿದೆ? ಎಷ್ಟು ಪ್ರಕರಣಗಳಲ್ಲಿ ಪೊಲೀಸರು ಅನಾಹುತವಾಗುವ ಮುನ್ನ ಎಚ್ಚೆತ್ತುಕೊಂಡಿದ್ದಾರೆ?ಉಗ್ರರ ಬುದ್ಧಿಮತ್ತೆ ಮುಂದೆ ಏಕೆ ಮಂಕಾಗುತ್ತಿದ್ದಾರೆ? ಉಗ್ರರು ಒಮ್ಮೆ ಬಾಂಬ್ ಹಾಕಿದರೆಂದರೆ, ಪೊಲೀಸರ ಗಮನವೆಲ್ಲಾ ಬಾಂಬ್‌ಗಳ ಬಗ್ಗೆಯೇ ಇರುತ್ತದೆ. ಗುಂಡು ಹಾರಿಸಿದರೆಂದರೆ ಬಂದೂಕು ಹಿಡಿದುಕೊಂಡವರು ಪೊಲೀಸರಿಗೆ ಶಂಕಿತ ಉಗ್ರರಂತೆ ತರುತ್ತಾರೆ. ಇವರನ್ನು ಆಟ ಆಡಿಸುವುದು ಉಗ್ರರಿಗೆ ಆಟದಂತೆಯೇ ಆಗಿದೆ ಎನಿಸುತ್ತದೆ. ಯಾರ ನಿರ್ಲಕ್ಷ್ಯವೋ, ಅಜಾಗರೂಕತೆಯೋ, ಯಾವ ಉದ್ದೇಶಕ್ಕಾಗಿ ಭಯೋತ್ಪಾದನೆ, ಉಗ್ರರ ಅಟ್ಟಹಾಸ ನಡೆಯತ್ತದೆಯೋ? ಒಟ್ಟಿನಲ್ಲಿ ಅಮಾಯಕರು ಅಮೂಲ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿ ಭಯೋತ್ಪಾದನೆ ಮತ್ತು ಬಾಂಬ್, ಗುಂಡುಗಳ ಮೂಲಕ ಯುದ್ಧ ಸಾರಿರುವವರಿಗೆ ದಿಕ್ಕಾರವಿರಲಿ. ಸಹನೆ ಪ್ರೀತಿ ಎಂಬ ಮಂತ್ರ ಜಪಿಸಿದ ಗಾಂಧೀಜಿ ಜನಿಸಿದ ದೇಶದಲ್ಲಿ ಈ ರೀತಿ ಹಿಂಸೆ ನಡೆಯತ್ತಿರುವುದನ್ನು ತಾಯಿ ಭಾರತಿ ನೋಡುತ್ತಿದ್ದಾಳೆ . ಆಕೆಗಾಗಿರುವ ನೋವನ್ನು ತುಂಬುವವರು ಯಾರು?
ಉಗ್ರರ ಅಟ್ಟಹಾಸಕ್ಕೆ ಕಾರಣವಾಗಿರುವ ಸಮಾಜದ ಡೊಂಕುಗಳನ್ನು ತಿದ್ದುವವರು ಯಾರು? ಅಹಿಂಸೆಯಿಂದ ನೋವು
ಸಿಗುತ್ತದೆಯೇ ಹೊರತು, ಅದರಿಂದ ಇತರೆ ಲಾಭವಿಲ್ಲ. ಅಹಿಂಸೆ ತತ್ವ ಪಾಲಿಸಿದ ಮಹಾತ್ಮ ಗಾಂಧೀಜಿಯವರೇ ಗೋಡ್ಸೆಯ ಗುಂಡುಗಳಿಗೆ ಪ್ರಾಣ ತೆತ್ತುಬಿಡಬೇಕಾಯಿತು. ಇನ್ನು ಅಹಿಂಸೆ ಮಾರ್ಗ ಹಿಡಿದಿರುವವರು ಇದರಿಂದ ತಪ್ಪಿಸಿಕೊಳ್ಳುವರೇ?!
ಬಹುಷ: ಇದೆಲ್ಲವನ್ನೂ ನಿಲ್ಲಿಸಲು ಇರುವ ಏಕಕ ದಾರಿ ಎಂದರೆ ಎಲ್ಲರೂ ಪರಸ್ಪರ ಪ್ರೀತಿ - ವಿಶ್ವಾಸದಿಂದ ಇರುವುದು. ಇಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರನ್ನು ಸ್ಮರಿಸುತ್ತೇನೆ - ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದಾದರೂ ಹೇಗೆ?
ಲೆಟ್ಸ್ ಲವ್ ಮತ್ತೇ ಮತ್ತೆ...

Saturday, November 22, 2008

ಕನಸಿನ ಮಳೆ!


ನಿನ್ನೆ ರಾತ್ರಿ ನಿದ್ರೆಯ ಆಗಸದಲ್ಲಿ
ಕನಸುಗಳ ಮಳೆ ಆಯ್ತು;
ಪ್ರೀತಿಯ ಬೆಳೆ ಬೆಳೆದಿತ್ತು
ಆಹಾ.. ಎಂತಹ ಲೋಕವದು
ನಿದ್ರೆಗೂ ಎಚ್ಚರವಾಗುತ್ತದೆ!
ಬೆಳಕಿಗೆ ರಾತ್ರಿ ಕಂಡರೆ ಕೋಪವಿರಬೇಕು!
ಓಡಿಸಿಬಿಟ್ಟಿತು; ಕತ್ತಲನ್ನೂ- ನನ್ನ ಕನಸನ್ನೂ..!

ನೆನಪಿನ ಭೂತ...

ಕಳೆದ ಕಾಲದ ಸ್ಮಶಾನದಲ್ಲಿ
ನೆನಪುಗಳ ಭೂತಗಳು
ಕುಣಿಯತ್ತಿವೆ; ಕಾಡುತ್ತಿವೆ..!
ಕಾಲ ಸಾಯುತ್ತದೆ ಏಕೆ?
ನೆನಪುಗಳ ಭೂತ ಸೃಷ್ಟಿಸಲೇ?!

ಹೀಗಾಗುತ್ತಾ...!?


ಬಂದೂಕಿನ ಬಾಯಲ್ಲಿ ಸುವ್ವಾಲಿ;
ಧನಿಕರ ಬಾಯಲ್ಲಿ ಸೇವೆ;
ಕಟುಕರ ಬಾಯಲ್ಲಿ ಪ್ರೀತಿ-ವಿಶ್ವಾಸದ ಮಾತು;
ಶಿಕ್ಷಕರ ಬಾಯಲ್ಲಿ ಪಾಠದೊಂದಿಗೆ ಮಾರ್ಗದರ್ಶನ;
ಲೇಖನಿಯ ಅಂಚಿನಲ್ಲಿ ಪ್ರಾಮಾಣಿಕತೆ;
ಆಳುವವರ ಮನಸ್ಸಿನಲ್ಲಿ ಜನಸೇವಾ ಮನೋಭಾವ
ಇದ್ದರೆ - ಲೋಕ ಸುಂದರ?!
ಹೀಗಾಗುತ್ತಾ..?!

Tuesday, November 18, 2008

ಸ್ನಾನ ಬೇಕಿದೆ!


ಕಣ್ಣೀರು ಕಣ್ಣಿಗೆ ಆಗುವ ಸ್ನಾನ
ಮಳೆ - ಭೂಮಿ ತಾಯಿಗೆ ಪ್ರಕೃತಿ ದೇವತೆ ಮಾಡಿಸುವ ಸ್ನಾನ
ಸ್ನೇಹ ಪ್ರೀತಿ - ಮನಸಿನ ಕೊಳೆ ತೊಳೆಯಲು ಆಗುವ ಭಾವನೆಯ ಸ್ನಾನ
ಇದೊಂದು ಸ್ನಾನವಾದರೆ ಮತ್ತೊಂದು
ಸ್ನಾ(ಸ್ಥಾ)ನದ ಅಗತ್ಯವಿಲ್ಲ!
ಬಾ ವರುಣ ಸ್ನೇಹ - ಪ್ರೀತಿ
ವಿಶ್ವಾಸ - ನಂಬಿಕೆಯ ರೂಪದಲ್ಲಿ
ತೋಯ್ಸಿ ಹೋಗು ನಮ್ಮೆಲ್ಲರನ್ನು -
ಸ್ನಾನ ಮಾಡಿಸು ಇನ್ನಾದರೂ...!

ಮಂಜು ಮುಸುಕಿದೆ


ನನ್ನ ಮನಸಿನ ಮಂಚದ
ಮೇಲೆ ನಿನ್ನದೇ ಮಂಪರು
ಎಷ್ಟೊಂದು ಮಂಜು
ಮುಸುಕುತ್ತೆ ಅಲ್ಲವೇ
ಇಷ್ಟೇ ಇಷ್ಟು ಪುಟ್ಟ
ಹೃದಯದ ಮೇಲೆ!?

ಒಡೆದು ಮರಿಯಾಗುತ್ತಿದ್ದೆ!

ನಾ ಮೊಟ್ಟೆಯಾಗಿದ್ದರೆ ನೀ
ಸೋಕಿದ ಕೂಡಲೇ ಒಡೆದು
ಮರಿಯಾಗುತ್ತಿದ್ದೆ!
ನಕ್ಷತ್ರವಾಗಿದ್ದರೆ ನೀ ಬಂದ
ಕೂಡಲೇ ಆಕಾಶಕ್ಕೆ ರಂಗೋಲಿಯಾಗುತ್ತಿದ್ದೆ!
ಇಳೆಗೆ ವಿಸ್ಮಯ ಎನಿಸುತ್ತಿದೆ!

Sunday, November 16, 2008

ರಸಿಕ ವರುಣ!


ಈ ಮಳೆರಾಯ ಎಂಥಾ
ರಸಿಕ ಅಲ್ಲವೇ?
ಯಾರನ್ನು ಯಾವಾಗ
ಬೇಕಾದರೂ...
ಯಾರೊಂದಿಗೆ ಯಾವಾಗ
ಬೇಕಾದರೂ..
ರೊಮ್ಯಾನ್ಸ್ ಮಾಡುತ್ತಾನೆ..!
ನಾಚಿಕೆ ಬಿಟ್ಟವ...!
ಊರ ಆಚೆಯಾದರೂ ಸರಿ;
ಒಳಗಾದರೂ ಸರಿ !

ನೋಡಲೆಂದಲ್ಲ...


ನಾ ಬರುತ್ತೇನೆ ನಿನ್ನೊಟ್ಟಿಗೆ
ಮಾತನಾಡುತ್ತೇನೆ
ನೋಡುತ್ತೇನೆ ಎಂಬ ಆಸೆಯಿಂದಲ್ಲ;
ಸದಾ ಕಣ್ಣಲ್ಲೆ ಇರುವ ನಿನ್ನನ್ನು
ನೋಡಲು ಬಂದೆ ಎಂದು
ಹೇಗೆ ಹೇಳಲಿ? ಅವಮಾನಿಸಲಿ?
ಕಣ್ಣಲ್ಲಿ ಹೊತ್ತಿಸಿಟ್ಟ ನಂದಾದೀಪ ನೀನು..!

ಉಣ್ಣುವವರು ಯಾರು?

ಜಾಗತಿಕ ತಾಪಮಾನ
ಎಂಬ ಒಲೆಯಲ್ಲಿ
ಪರಿಸರವೆಂಬ ಅಕ್ಕಿ ಬೇಯುತ್ತಿದೆ
ಅದನ್ನು ಉಣ್ಣುವವರು ಯಾರು?
ಬಡಿಸುವವರು ಯಾರು?!

ಬಾ ಮತ್ತೆ ಬಿಡಿಸು!


ಹೃದಯದ ಮೇಲೆ ನೀ ಬಿಡಿಸಿದ
ರಂಗೋಲಿಯನ್ನು ಜೋರು
ಗಾಳಿ ಅಳಿಸಿ ಹಾಕಿತು;
ಬಾ ಮತ್ತೆ ಚುಕ್ಕಿ ಇಡು ಈ
ಹೃದಯದ ನೆಲವು ಹಬ್ಬಕ್ಕಾಗಿ ಕಾದಿದಿ!
ಧೂಳು ಎಬ್ಬಿಸದೆ ಒಗ್ಗೂಡಿಸುವ
ಪ್ರೀತಿ ಎಂಬ ಸಗಣಿ ಹಾಕು ಬಾ...

ನಿನ್ನದೇ ಸಾಲುಗಳು...

ಹುಡುಗಿ, ಕಲ್ಪನೆಯ ಸಾಲುಗಳಲ್ಲಿ
ಕನಸಿನ ಕವಿತೆ ಕಟ್ಟಬೇಡ!
ಪುಸ್ತಕವಲ್ಲ ಈ ಹೃದಯ;
ಲೇಖನಿಯಲ್ಲ ಆ ಭಾವನೆಗಳು!
ಹೃದಯದ ಮೇಲೆ ಬರೆಯಲು ಹೋದರೆ
ಜಾಗ ಎಲ್ಲಿದೆ?
ಕೆಡಿಸಬೇಡ ಅದು ನನ್ನವಳ
ಮುಖದ ಹಾಳೆ - ಅಲ್ಲಿ
ಅವಳವೇ ಸಾವುಗಳು; ಅವಳದೇ ಪದಗಳು!

ಅವನು!

ಆ ಹುಡುಗ ಅವನಾಯಿತು
ಅವನ ಕೆಲಸವಾಯಿತು
ಸುಮ್ಮನಿದ್ದ; ಹೂ ಬಿರಿಯುವಂತೆ
ನಕ್ಕು ಹೋದಳು ಅವಳು
ಅರಳಲಿಲ್ಲ!
ಈಗ, ವೈನಾಯಿತು ಅವನಾಯಿತು!?

Saturday, November 15, 2008

ಎಳೆದು ತರಬೇಕು?!

ಎಳೆದು ತರಬೇಕಿದೆ
ನಿದ್ರೆಯನು ನಮ್ಮ ಬಳಿಗೆ;
ಯಾವ ಚೆಲುವೆಯ
ಕಣ್ಣಿಗೆ ಸೋತು
ಶರಣಾಗಿ ಹೋಗಿದೆಯೋ?!
ಕನಸು ಕಾಣುತ್ತಾ ಮಲಗಿದೆಯೋ?!

ಎಲ್ಲೋ ಮಲಗಿರಬೇಕು

ಗಂಟೆ ೧೨,
ಮನೆ ಕಾಯುವ ನಾಯಿಯೂ
ಗೀಳುವುದು ಬಿಟ್ಟು
ಮಲಗಿ ಬಿಟ್ಟಿದೆ.
ನಿದ್ರೆ ಕಾಡಿಸುತ್ತಿದೆ ಏಕೆ?
ಬಾಗಿಲ ಮರೆಯಲ್ಲಿ ನಿಂತು
ನಕ್ಕು ನರಳಿಸುವ ಹುಡುಗಿಯಂತೆ?!
ನಿದ್ರೆ ಎಲ್ಲೋ ಮಲಗಿರಬೇಕು; ನಿದ್ರೆ ಬಂದು;
ಮದಿರೆಯಲ್ಲಿ ಮಿಂದು?!

ಹುಟ್ಟು-ಸಾವು- ಪ್ರೀತಿ

ಅಲ್ಲಿ ಕನಸುಗಳು ಹುಟ್ಟುತ್ತವೆ;
ಸಾಯುತ್ತವೆ
ಏಕೆಂದರೆ, ಪ್ರೀತಿ ರುದ್ರಭೂಮಿ
ಅಲ್ಲಿ ಸೋತೆವೆಂದರೆ ಇಲ್ಲಿ ಗೆಲ್ಲುವುದಿಲ್ಲ!

ಕಡಿದು ಹಾಕಬೇಕು?

ಹಸಿರು ಮರಗಳನ್ನೆಲ್ಲಾ
ಕಡಿದು ಹಾಕಬೇಕು;
ಏಕೆಂದರೆ, ಈ ಪಾಪಿ ಜನರಿಗೆ
ಉಸಿರು ನೀಡುತ್ತಿವೆಯಲ್ಲ ಅದಕ್ಕೆ!

ಮರಣಾನಂದ?

ಗಾಳಿಗೆ ಎಲೆಗಳು
ಅಲುಗಾಡುತ್ತಿವೆ,
ಆನಂದಿಸುತ್ತಿವೆ,
ಬಿದ್ದು ಸಾಯುವಾಗಲೂ
ಅವುಗಳಿಗೆ ಎಷ್ಟು ಆನಂದ?!

ಬ()ದುಕು !

ಬದುಕು ಬಂದೂಕಿಗೆ
ಸಾಮ್ಯತ ಇದೆ
ಬದುಕೂ ಒಂದು ರೀತಿ
ಬಂದೂಕು!
ಅದರಲ್ಲಿ ಕ್ರೌರ್ಯ
ಎಂಬ ಗುಂಡುಗಳಿವೆ!
ಸಾಂತ್ವನ, ಸಹನೆ ಎಂಬ
ಬಟನ್ ಸಹ ಇದೆ!
ಅಪ್ಪಿ ತಪ್ಪಿ ಅದುಮಿದರೆ,
ದುಡುಕಿದರೆ ಎದುರಿನವರ ಬದಕು ಖಲ್ಲಾಸ್!
ಆಗ ಬದುಕಿಗೂ ಬಂದೂಕಿಗೂ ಏನೂ
ಅರ್ಥವಿಲ್ಲ
ಎಲ್ಲವೂ ಫೈರ್!

ಮೌನ ಎಂದರೆ?

ಅಷ್ಟಕ್ಕೂ ಮೌನ
ಎಂದರೇನು?
ಎಲ್ಲವನ್ನೂ ಸೋಲಿಸುವ
ಒಪ್ಪಿಕಳ್ಳುವ
ಭ್ರಮಿಸುವ
ಅನಿಸುವ
ಕಾಣಿಸುವ
ನಡೆಸುವ
ತಿಳುಸುವ
ಪ್ರಭಾವಿ ಭಾಷ!

ಕರಗೋಲ್ಲವೇ?

ಆತ ನನ್ನೊಂದಿಗೆ
ಮಾತು ಬಿಟ್ಟಿದ್ದಾನೆ
ಕಲ್ಲುಗಳೇ ಕರಗಿ ಹೋಗುತ್ತಿವೆ
ಕಲ್ಲರಳಿ ಹೂವಾಗುತ್ತಿವೆ
ಇನ್ನು ಆ ಮನದಲ್ಲಿನ
ಕೋಪದ ಮಂಜು ಕರಗದೇ
ಇರುವುದ?!

Thursday, November 13, 2008

ನಾವೇನಾಗದ್ವಿ?

ವೈಶಾಖ ಪೂರ್ಣಮಿಯಂದು
ಬುದ್ಧ ಪರಿನಿರ್ವಾಣಗೊಂಡ
ಎಷ್ಟು ಅಮಾವಾಸ್ಯೆ ಬಂದವು?
ಎಷ್ಟು ಪೂರ್ಣಿಮೆ ಬಂದವು?
ನಾವೇನಾಗಿದ್ದೀವಿ?
ಅತ್ತ ಬೆಳಕೂ ಆಗಲಿಲ್ಲ,
ಇತ್ತ ಕತ್ತಲೂ ಆಗಲಿಲ್ಲ
ಕನಸುಗಳ ದಾರಿಯಲಿ
ಮನಸುಗಳ ಮೆರವಣಿಗೆ
ಆಗುತ್ತಿದೆ ಅಷ್ಟೆ!
ಈ ಉತ್ಸವಕ್ಕೆ ಏನು ಹೆಸರು?!

ಸ್ನೇಹ

ಮನದ ಮೈತ್ರಿ
ಯಾವಾಗಲೂ ಜೊತೆಗಿರುತ್ರೀ
ಜೊತೆಯಲ್ಲೇ ತಿರುಗುತ್ತಿರುತ್ರೀ!

ಪ್ರೀತಿ

ಖಾಲಿ ಮನಸಿನ
ಪುಟದ ಮೇಲೆ
ಅಚ್ಚಾಗೋ ಒಲವಿನ ಅಕ್ಷರ!

ಆಗುತ್ತದೆ

ಏನು ಮಾಡದಿದ್ದರೂ ಎಲ್ಲವೂ ಆಗುತ್ತದೆ!
ಹೇಗಿದ್ದರೂ ಆಗುತ್ತದೆ
ಎಂದು ಸುಮ್ನಿರಬಾರದು!
ಹಾಗೆಂದು ಸುಮ್ ಸುಮ್ನೆ
ಏನೂ ಮಾಡಲೂ ಬಾರದು!
ಸುಮಾರಾಗಿ ಆದರೂ ಏನಾದರೂ
ಮಾಡಿದರೂ ಸುಮಾರು!

ಕನಸು

ಕತ್ತಲೆ ಲೋಕದ
ವಿಸ್ಮಯ!

ಬೆಂಕಿಯಲ್ಲಿಯೇ ಬದುಕು!

ಬೀಡಿ ಸಿಗರೇಟಿಗೆ ಗೊತ್ತಿಲ್ಲ
ತಾನು ಸೇವಿಸುವವರ ಆರೋಗ್ಯಕ್ಕೆ ಹಾನಿಕರ ಎಂದು
ಸುಟ್ಟು ಹೋಗುತ್ತದ ಎರಡು
ಬೆರಳುಗಳ ನಡುವೆ ಎರಡು ನಿಮಿಷದಲ್ಲಿ...
ಅವಕ್ಕೆ ವರುಷವೆಲ್ಲಾ ಕಿಚ್ಚಿನ ಸಂಭ್ರಮ!
ಉರಿದು ಉರಿದು ಹೊಗೆಯಾಗುತ್ತವೆ..!
ಅವುಗಳಿಗೆ ಬೆಂಕಿಯಲ್ಲಿಯೇ ಬದುಕು
ಸುಟ್ಟು ಸುಟ್ಟು ಸಾಯುತ್ತಿರಬೇಕು!

ಅಳು!

ಯಾರಿಗೆ ಗಾತ್ತಾಗುತ್ತದೆ?
ಮಳೆ ಸುರಿಯುತ್ತಿದೆ...
ಪ್ರತಿ ಹನಿಯೊಳಗೂ ಮೋಡ ಕಳೆದುಕಂಡ ಅಳು!
ಯಾರಿಗೆ ಗೊತ್ತಾಗುತ್ತೆ ಹೇಳು?!

ಏನು ಹೆಸರು?

ಪ್ರೀತಿ ಇಲ್ಲದ ಮೇಲೆ
ಜೀವನಕ್ಕೆ ಏನು ಹೆಸರು?

ಹೆರಿಗೆ ಇಲ್ಲ!

ನನ್ನ ಕನಸುಗಳ ಬಸುರಿಗೆ
ಹೆರಿಗೆ ಆಗುವುದೇ ಇಲ್ಲ!
ಎಚ್ಚರ ಎಂಬ ಭ್ರೂಣ ಹತ್ಯೆಗೆ
ಶಿಕ್ಷೆ ವಿಧಿಸುವವರು ಯಾರು?
ಅದಕ್ಕೆ ಕಾಯ್ದೆ ಎಲ್ಲಿದೆ?
ನಿದ್ರೆ ಬರುತಿರಲೂ ಬೇಕು,
ಎಚ್ಚರ ಆಗುತ್ತಿರಲೂ ಬೇಕು
ಕನಸುಗಳೂ ಬೇಕು;
ಕನಸಲ್ಲೇ ಸೊಗಸು ಕಾಣಬೇಕು!

ಏನು ಸಂಬಂಧ?

ಗಾಳಿಗೂ ಹೂವುಗಳಿಗೂ ಏನು ಸಂಬಂಧ?!
ನಲುಗುತ್ತವೆ; ಅಲುಗುತ್ತವೆ; ನಲಿಯುತ್ತವೆ
ಮುಟ್ಟದೆಯೂ; ನೋಡದೆಯೂಪ್ರೀತಿ ಮಾಡುತ್ತಿವೆ!

ತಮಟೆ ಬಾರಿಸುವವರಾಗಬೇಕು!

ತಮಟೆ ಬಾರಿಸುವವರಾಗಬೇಕು ನಾವು;
ಸತ್ತವರ ಮುಂದೆಯೂ ಕಾಯಕ ನಿಷ್ಠ
ಮರೆಯುವುದಿಲ್ಲ ಅವರು?!
ಜೀವನದ ಭವಿಷ್ಯದ ತಮಟೆ
ಬಾರಿಸುತ್ತಲೇ ಇರುತ್ತಾರೆ;
ಹೊಟ್ಟೆ ಹೊರೆಯುತ್ತಿರುತ್ತಾರೆ!

Tuesday, November 11, 2008

ಕಳೆದು ಹೋಗಿದ್ದೆ...

ಕಳೆದು ಹೋಗಿದ್ದೆ...!
ಬೆಳಗ್ಗೆಯಾದರೆ ಕೆಲಸ ರಾತ್ರಿಯಾದರೆ ನಿದ್ರೆಇಷ್ಟು ಬಿಟ್ಟು ಬೇರೆ; ಕೇಳಬೇಡಿ
ಏನಾದರು ಬರೆಯಬೇಕುನಿಮ್ಮೊಟ್ಟಿಗೆ ಮಾತಾಡಬೇಕುಅನುಭವ, ಭಾವನೆ ಹಂಚಿಕೊಳ್ಳಬೇಕು ಎಂಬ ಆಸೆಈ 'ಭಗಿವನಮೈದಳೆದು ನಿಲ್ಲಲು ಕಾರಣಇನ್ನು ಇಲ್ಲಿ ಬರವಣಿಗೆಯ ಗಿಡ ಬೆಳೆಯುತ್ತೇನೆ....

ದೀಪ ಬೇಡ !

ದೀಪಾವಳಿಗೆ ದೀಪ ಬೇಡ; ನಿನ್ನ ಸೌಂದರ್ಯದ ಕಾಂತಿಗಿಂತ ದೀಪ ಬೇಕೆ?!