Thursday, November 27, 2008

ಸಾವಿಗೆ ಕೊನೆ ಇಲ್ಲ...


ಸಾವು ಇರುವುದೇ ಹಾಗೆ...
ಯಾರನ್ನೂ ನೋಡುವುದಿಲ್ಲ, ಚಿಂತಿಸುವುದಿಲ್ಲ, ಮರುಗುವುದಿಲ್ಲ, ಕೊರಗುವುದಿಲ್ಲ.
ಸಾವು ಯಾರನ್ನೂ ನೋಡುವುದಿಲ್ಲ...
ಗಂಡು ಹಾರಿಸುತ್ತಿರುವ ಉಗ್ರನನ್ನಾದರೂ ಸರಿ; ಜನರನ್ನು ರಕ್ಷಿಸಲು ನಿಂತ ಪೊಲೀಸರನ್ನಾದರೂ ಸರಿ. ದೇಶ ರಕ್ಷಣೆಗೆ ನಿಂತ ಸೈನಿಕರನ್ನಾದರೂ ಸರಿ.
ಸಾವು ಸಮಯ ನೋಡುವುದಿಲ್ಲ...
ಮನೆಯಲ್ಲಿದ್ದರಾದರೂ ಸರಿ, ಹೋಟೆಲ್‌ನಲ್ಲಿದ್ದರಾದರೂ ಸರಿ, ಪ್ರಯಾಣದಲ್ಲಾದರೂ ಸರಿ.
ಸಾವು ಸ್ಥಿತಿ ಗಮನಿಸುವುದಿಲ್ಲ...
ಸಂಭ್ರಮದಲ್ಲಿದ್ದರೂ ಸರಿ, ಸಂಕಷ್ಟದಲ್ಲಿದ್ದರೂ ಸರಿ, ಯಾರನ್ನೋ ಕಾಣುವ ಕಾತರದಲ್ಲಿದ್ದರೂ ಸರಿ, ಏನನ್ನೋ ಪಡೆಯವ; ಗಳಿಸುವ ಛಲವಿದ್ದರೂ ಸರಿ.
ಸಾವು ಯಾರನ್ನೂ ಬಿಡುವುದಿಲ್ಲ...
ಬಡವನಾದರೂ ಸರಿ, ಧನಿಕನನ್ನಾದರೂ ಸರಿ, ಮಾಣಿಯಾದರೂ ಸರಿ, ಮಾಲಿಕನಾದರೂ ಸರಿ.
ಸಾವು ಇರುವುದೇ ಹೀಗೆ.

- ನ. ೨೬ರ ರಾತ್ರಿ ಸಾವಿಗೆ ಕಾರಣ ಹುಡುಕಲು, ಇದನ್ನು ಬರೆಯಲು ಕಾರಣವಾಗಿದ್ದು, ಮುಂಬೈನಲ್ಲಿ ನಡದ ಉಗ್ರರ ಅಟ್ಟಹಾಸ.
ಉಗ್ರರೂ ಒಂದು ರೀತಿಯಲ್ಲಿ ಸಾವಿನಂತೆಯೆ. ಕುರಡು ಉದ್ದೇಶಕ್ಕೆ, ತಮ್ಮದಲ್ಲದ ಆಸೆಗೆ, ಯಾರದೋ ಒತ್ತಡಕ್ಕೆ ಸಿಕ್ಕಿಯೋ ಅಥವಾ ಮತ್ಯ್ತಾವದೋ ಕಾರಣಕ್ಕಾಗಿಯೋ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾರೆ. ಯಾರಿಗೋ ಯಾರದೋ ಮೇಲಿರುವ ಕೋಪ ಅಮಾಯಕರ ಬಾಳಿನಲ್ಲಿ ಬರಸಿಡಿಲಾಗಿ ಬಡಿಯುತ್ತದೆ. ಆ ತಾಜ್‌ನಲ್ಲಿರಲಿ, ನಾರಿಮನ್ ಪ್ರದೇಶದಲ್ಲಿರಲಿ, ಓಬೆರಾಯ್ ಹೋಟೆಲ್‌ನಲ್ಲಾಗಲೀ ಸಾವಿಗೀಡಾದ ನೂರಕ್ಕೂ ಹಚ್ಚು ಜೀವಗಳ ಕನಸುಗಳು ಏನಾಗಿದ್ದವೋ? ಬೆಳಗ್ಗೆಗಾಗಿ ಏನೇನು ಯೋಜನೆಗಳು ಸಿದ್ಧವಾಗಿದ್ದವೋ. ಏನೇನು ಅಂದುಕೊಂಡಿದ್ದರೋ. ಅವರ ಪ್ರಾಣದೊಂದಿಗೆ ನುಚ್ಚು ನೂರಾದವಲ್ಲ ಆ ಕಸಸುಗಳು ಅವುಗಳಿಗೆ ಬೆಲೆ ಕಟ್ಟುವವರು ಯಾರು? ರಾತ್ರಿ ಮಲಗಿ ಮುಂಜಾನೆಯಾಗುವವರೆಗೆ ಅವರನ್ನು ಜವಾರಾಯನ ಬಳಿಗೆ ಕಳುಹಿಸುವ ಕೃತ್ಯ ಎಸಗಿದ ಉಗ್ರ ಎನ್ನುವವರಿಗೆ ಬುದ್ಧಿ ಹೇಳುವವರು ಯಾರು?
ಇಷ್ಟಕ್ಕೂ ಅವರ ಬುದ್ಧಿವಂತಿಕೆ ಎದುರು ನಮ್ಮ ಪೊಲೀಸ್ ವ್ಯವಸ್ಥೆಯ, ಆಡಳಿತದ, ಗಪ್ತಚರ ವಿಭಾಗದವರ ಬದ್ಧಿಗೆ ಏನಾಗಿದೆ? ಎಷ್ಟು ಪ್ರಕರಣಗಳಲ್ಲಿ ಪೊಲೀಸರು ಅನಾಹುತವಾಗುವ ಮುನ್ನ ಎಚ್ಚೆತ್ತುಕೊಂಡಿದ್ದಾರೆ?ಉಗ್ರರ ಬುದ್ಧಿಮತ್ತೆ ಮುಂದೆ ಏಕೆ ಮಂಕಾಗುತ್ತಿದ್ದಾರೆ? ಉಗ್ರರು ಒಮ್ಮೆ ಬಾಂಬ್ ಹಾಕಿದರೆಂದರೆ, ಪೊಲೀಸರ ಗಮನವೆಲ್ಲಾ ಬಾಂಬ್‌ಗಳ ಬಗ್ಗೆಯೇ ಇರುತ್ತದೆ. ಗುಂಡು ಹಾರಿಸಿದರೆಂದರೆ ಬಂದೂಕು ಹಿಡಿದುಕೊಂಡವರು ಪೊಲೀಸರಿಗೆ ಶಂಕಿತ ಉಗ್ರರಂತೆ ತರುತ್ತಾರೆ. ಇವರನ್ನು ಆಟ ಆಡಿಸುವುದು ಉಗ್ರರಿಗೆ ಆಟದಂತೆಯೇ ಆಗಿದೆ ಎನಿಸುತ್ತದೆ. ಯಾರ ನಿರ್ಲಕ್ಷ್ಯವೋ, ಅಜಾಗರೂಕತೆಯೋ, ಯಾವ ಉದ್ದೇಶಕ್ಕಾಗಿ ಭಯೋತ್ಪಾದನೆ, ಉಗ್ರರ ಅಟ್ಟಹಾಸ ನಡೆಯತ್ತದೆಯೋ? ಒಟ್ಟಿನಲ್ಲಿ ಅಮಾಯಕರು ಅಮೂಲ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿ ಭಯೋತ್ಪಾದನೆ ಮತ್ತು ಬಾಂಬ್, ಗುಂಡುಗಳ ಮೂಲಕ ಯುದ್ಧ ಸಾರಿರುವವರಿಗೆ ದಿಕ್ಕಾರವಿರಲಿ. ಸಹನೆ ಪ್ರೀತಿ ಎಂಬ ಮಂತ್ರ ಜಪಿಸಿದ ಗಾಂಧೀಜಿ ಜನಿಸಿದ ದೇಶದಲ್ಲಿ ಈ ರೀತಿ ಹಿಂಸೆ ನಡೆಯತ್ತಿರುವುದನ್ನು ತಾಯಿ ಭಾರತಿ ನೋಡುತ್ತಿದ್ದಾಳೆ . ಆಕೆಗಾಗಿರುವ ನೋವನ್ನು ತುಂಬುವವರು ಯಾರು?
ಉಗ್ರರ ಅಟ್ಟಹಾಸಕ್ಕೆ ಕಾರಣವಾಗಿರುವ ಸಮಾಜದ ಡೊಂಕುಗಳನ್ನು ತಿದ್ದುವವರು ಯಾರು? ಅಹಿಂಸೆಯಿಂದ ನೋವು
ಸಿಗುತ್ತದೆಯೇ ಹೊರತು, ಅದರಿಂದ ಇತರೆ ಲಾಭವಿಲ್ಲ. ಅಹಿಂಸೆ ತತ್ವ ಪಾಲಿಸಿದ ಮಹಾತ್ಮ ಗಾಂಧೀಜಿಯವರೇ ಗೋಡ್ಸೆಯ ಗುಂಡುಗಳಿಗೆ ಪ್ರಾಣ ತೆತ್ತುಬಿಡಬೇಕಾಯಿತು. ಇನ್ನು ಅಹಿಂಸೆ ಮಾರ್ಗ ಹಿಡಿದಿರುವವರು ಇದರಿಂದ ತಪ್ಪಿಸಿಕೊಳ್ಳುವರೇ?!
ಬಹುಷ: ಇದೆಲ್ಲವನ್ನೂ ನಿಲ್ಲಿಸಲು ಇರುವ ಏಕಕ ದಾರಿ ಎಂದರೆ ಎಲ್ಲರೂ ಪರಸ್ಪರ ಪ್ರೀತಿ - ವಿಶ್ವಾಸದಿಂದ ಇರುವುದು. ಇಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರನ್ನು ಸ್ಮರಿಸುತ್ತೇನೆ - ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದಾದರೂ ಹೇಗೆ?
ಲೆಟ್ಸ್ ಲವ್ ಮತ್ತೇ ಮತ್ತೆ...

1 comment:

dinesh said...

Nimma Blog chennagide.... four liners super agide. Lekhana Chennagide.